ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಕುಪ್ಪೆಪದವಿನಲ್ಲಿ ಮುಸ್ಲಿಂ ಐಕ್ಯತಾ ಸಮಾವೇಶ: ದೇಶದ ಅಖಂಡತೆಗೆ ತೊಡಕುಂಟು ಮಾಡುವ ಸಂಘಟನೆ ಆರೆಸ್ಸೆಸ್-ಬಶೀರ್ ಅಹ್ಮದ್ ಮಂಜೇಶ್ವರ

ಕುಪ್ಪೆಪದವಿನಲ್ಲಿ ಮುಸ್ಲಿಂ ಐಕ್ಯತಾ ಸಮಾವೇಶ: ದೇಶದ ಅಖಂಡತೆಗೆ ತೊಡಕುಂಟು ಮಾಡುವ ಸಂಘಟನೆ ಆರೆಸ್ಸೆಸ್-ಬಶೀರ್ ಅಹ್ಮದ್ ಮಂಜೇಶ್ವರ

Mon, 11 Jan 2010 02:21:00  Office Staff   S.O. News Service
ಮಂಗಳೂರು, ಜ.೧೦: ದೇಶದ ಅಖಂಡತೆ ಕಾಪಾಡುವಲ್ಲಿ ತೊಡಕು ಉಂಟು ಮಾಡುವ ಅತಿ ದೊಡ್ಡ ಸಂಘಟನೆ ಆರೆಸ್ಸೆಸ್ ಎಂದು ಎಸ್.ಎಂ.ಬಶೀರ್ ಅಹ್ಮದ್ ಮಂಜೇಶ್ವರ ಅಭಿಪ್ರಾಯಪಟ್ಟಿದ್ದಾರೆ.

ಜಾವಗಲ್ ಬಾಬಾ ಸೌಹಾರ್ದ ವೇದಿಕೆ ವತಿಯಿಂದ ಗುರುಪುರ ಕೈಕಂಬದ ಕುಪ್ಪೆಪದವು ಜುಮಾ ಮಸೀದಿಯ ವಠಾರದಲ್ಲಿ ನಡೆದ ‘ಮುಸ್ಲಿಂ ಐಕ್ಯತಾ ಸಮಾವೇಶ’ದಲ್ಲಿ ಅವರು ಮಾತನಾಡುತ್ತಿದ್ದರು.

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯನ್ನು ಕೊಂದ ಗೋಡ್ಸೆಯ ಆರಾಧಕರು ದೇಶ ಪ್ರೇಮದ ಮುಖವಾಡ ಹೊತ್ತ ದೇಶ ದ್ರೋಹಿಗಳಾಗಿದ್ದಾರೆ ಎಂದು ಆರೋಪಿಸಿದರು.

ಹಿಂದೂ ಧರ್ಮದ ಪ್ರತಿಪಾದಕರಂತೆ ನಟಿಸಿ ವUಯ ಧ್ರುಕರಣಗೊಳಿಸಿ ಜನರನ್ನು ಒಡೆದು ಆಳುವ ನೀತಿಗೆ ಪ್ರಯತ್ನಿಸುತ್ತಿದ್ದ ಪ್ರಜ್ಞಾಸಿಂಗ್ ಠಾಕೂರ್‌ರಂತಹವರನ್ನು ಕಾನೂನಿನ ಮುಂದೆ ತಂದು ನಿಲ್ಲಿಸಿದ ನಿಷ್ಠಾವಂತ ಹೇಮಂತ್ ಕರ್ಕರೆಯವರಂತಹ ಅಧಿಕಾರಿಗಳ ಮರಣದ ನಿಗೂಢತೆ ಬಯಲಿಗೆಳೆಯಬೇಕಾಗಿದೆ ಎಂದು ಅವರು ಆಗ್ರಹಿಸಿದರು. 

ಸೈಯದ್ ಅಬೂಬಕರ್ ಸಿದ್ದೀಕ್ ತಂಙಳ್ ದುವಾ ನೆರವೇರಿಸಿದರು. ಬಶೀರ್ ಮದನಿ ಅಧ್ಯಕ್ಷತೆ ವಹಿಸಿದ್ದರು. ಸಿ.ಟಿ.ಎಂ.ಸೈಯದ್ ಆಟಕ್ಕೋಯ ತಂಙಳ್ ಸಮಾವೇಶ ಉದ್ಘಾಟಿಸಿದರು. ಅತಿಥಿಗಳಾಗಿ ಮುಹಮ್ಮದ್ ಆಶಿಕ್ ಸಖಾಫಿ, ಅಬ್ದುಲ್ ಜಮಾಲ್ ಮದನಿ, ಕೆ.ಆದಂ, ಅಬ್ದುರ್ರಝಾಕ್ ಮತ್ತಿತರರು ಉಪಸ್ಥಿತರಿದ್ದರು. 

ಪ್ರಾರಂಭದಲ್ಲಿ  ಲದಲ್ ಹಬೀಬ್ ಸಂಘದ ವತಿಯಿಂದ ಬುರ್ದಾ ಮಜ್ಲಿಸ್ ನಡೆಯಿತು. ಹುಸೈನ್ ಮುಸ್ಲಿಯಾರ್ ಬೊಳಿಯ ಕಾರ್ಯಕ್ರಮ ನಿರೂಪಿಸಿದರು.

Share: